BREAKING: ರಾಜ್ಯ ಸರ್ಕಾರದ ಮಹತ್ವದ ಆದೇಶ! ಬೆಂಗಳೂರಿಗೆ ಸಂಬಂಧಿಸಿದ 2 ಪ್ರತ್ಯೇಕ ಸುದ್ದಿಗಳು...

 BREAKING: ರಾಜ್ಯ ಸರ್ಕಾರದ ಮಹತ್ವದ ಆದೇಶ



ಕೊರೋನಾ ಸೋಂಕು ಪ್ರಕರಣಗಳ ಹೆಚ್ಚಳ ಹಿನ್ನೆಲೆ ಎಲ್ಲಾ

ಖಾಸಗಿ ಆಸ್ಪತ್ರೆಗಳೂ ತಮ್ಮಲ್ಲಿನ ಶೇ.75ರಷ್ಟು ಬೆಡ್ ಗಳನ್ನು

ಸರ್ಕಾರಕ್ಕೆ ನೀಡಬೇಕೆಂದು ರಾಜ್ಯ ಸರ್ಕಾರವು ಇಂದು

ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಆರೋಗ್ಯ

ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಆದೇಶವನ್ನು

ಖಾಸಗಿ ಆಸ್ಪತ್ರೆಗಳು ಪಾಲಿಸಬೇಕು. ಇದರಿಂದ 71,400

ಬೆಡ್ ಲಭ್ಯವಾಗಲಿದ್ದು, ಶಿಷ್ಟಾಚಾರದ ಮುಖೇನ

ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂದು ಖಾಸಗಿ ಆಸ್ಪತ್ರೆಯ

ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಬೆಂಗಳೂರಿಗೆ ಸಂಬಂಧಿಸಿದ 2 ಪ್ರತ್ಯೇಕ ಸುದ್ದಿಗಳು...




>ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಇಂದು

ಐತಿಹಾಸಿಕ ದಾಖಲೆ ಬರೆಯಲಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಇಂದಿನ ಸೋಂಕಿನ ಸಂಖ್ಯೆ 20,925ಕ್ಕೆ

ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

>ಕೊರೋನಾ ಹಿನ್ನೆಲೆ ವಾರಾಂತ್ಯದ ಕರ್ಪ್ಯೂ

ಹೇರಲಾಗಿದ್ದರೂ ಕೂಡ ಬೆಂಗಳೂರಿನ ಶ್ರೀರಾಂಪುರ

ಹಾಗೂ ಬ್ಯಾಟರಾಯನಪುರಗಳಲ್ಲಿ ಮಾರುಕಟ್ಟೆ

ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು

ಮಾರುಕಟ್ಟೆ ಮೇಲೆ ದಾಳಿ ಮಾಡಿ ಎಲ್ಲವನ್ನೂ ಮುಚ್ಚಿಸಿ,

ವ್ಯಾಪಾರಸ್ಥರನ್ನು ಮನೆಗೆ ಕಳುಹಿಸಿದ್ದಾರೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು