BREAKING: ರಾಜ್ಯ ಸರ್ಕಾರದ ಮಹತ್ವದ ಆದೇಶ
ಕೊರೋನಾ ಸೋಂಕು ಪ್ರಕರಣಗಳ ಹೆಚ್ಚಳ ಹಿನ್ನೆಲೆ ಎಲ್ಲಾ
ಖಾಸಗಿ ಆಸ್ಪತ್ರೆಗಳೂ ತಮ್ಮಲ್ಲಿನ ಶೇ.75ರಷ್ಟು ಬೆಡ್ ಗಳನ್ನು
ಸರ್ಕಾರಕ್ಕೆ ನೀಡಬೇಕೆಂದು ರಾಜ್ಯ ಸರ್ಕಾರವು ಇಂದು
ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಆರೋಗ್ಯ
ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಆದೇಶವನ್ನು
ಖಾಸಗಿ ಆಸ್ಪತ್ರೆಗಳು ಪಾಲಿಸಬೇಕು. ಇದರಿಂದ 71,400
ಬೆಡ್ ಲಭ್ಯವಾಗಲಿದ್ದು, ಶಿಷ್ಟಾಚಾರದ ಮುಖೇನ
ಸೋಂಕಿತರಿಗೆ ಚಿಕಿತ್ಸೆ ನೀಡಬೇಕೆಂದು ಖಾಸಗಿ ಆಸ್ಪತ್ರೆಯ
ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ 2 ಪ್ರತ್ಯೇಕ ಸುದ್ದಿಗಳು...
>ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಇಂದು
ಐತಿಹಾಸಿಕ ದಾಖಲೆ ಬರೆಯಲಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಇಂದಿನ ಸೋಂಕಿನ ಸಂಖ್ಯೆ 20,925ಕ್ಕೆ
ಏರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
>ಕೊರೋನಾ ಹಿನ್ನೆಲೆ ವಾರಾಂತ್ಯದ ಕರ್ಪ್ಯೂ
ಹೇರಲಾಗಿದ್ದರೂ ಕೂಡ ಬೆಂಗಳೂರಿನ ಶ್ರೀರಾಂಪುರ
ಹಾಗೂ ಬ್ಯಾಟರಾಯನಪುರಗಳಲ್ಲಿ ಮಾರುಕಟ್ಟೆ
ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು
ಮಾರುಕಟ್ಟೆ ಮೇಲೆ ದಾಳಿ ಮಾಡಿ ಎಲ್ಲವನ್ನೂ ಮುಚ್ಚಿಸಿ,
ವ್ಯಾಪಾರಸ್ಥರನ್ನು ಮನೆಗೆ ಕಳುಹಿಸಿದ್ದಾರೆ.
0 ಕಾಮೆಂಟ್ಗಳು
hrithiksuraj2@gmail.com