ಶಿಕ್ಷಕರ ಸಾವಿನ ವರದಿ ಸಲ್ಲಿಸುವಂತೆ ಸುರೇಶ್ಕುಮಾರ್ ಸೂಚನೆ! ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಆರೋಗ್ಯ ಇಲಾಖೆ.*ನಿಯಮ ಉಲ್ಲಂಘಿಸಿದವರಿಗೆ ಕೊರೋನಾ ಶಾಕ್ ...
ಉಪ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರ
ಪೈಕಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ಖಚಿತ ವಿವರ
ಸಲ್ಲಿಸುವಂತೆ ಪಿಯು ಮಂಡಳಿ ನಿರ್ದೇಶಕರಿಗೆ ಶಿಕ್ಷಣ
ಸಚಿವ ಎಸ್.ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ಈ ವೇಳೆ, ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 42
ಶಿಕ್ಷಕರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು ಎಂದು
ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ರಾಜ್ಯ ಮುಖ್ಯ
ಚುನಾವಣಾಧಿಕಾರಿಗಳೂ ಕೂಡ ಈ ಸಂಬಂಧಿತ ಮಾಹಿತಿ
ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ
ಸೂಚಿಸಿದ್ದಾರೆ.
ಕೊರೋನಾ 2ನೇ ಅಲೆ ದಿನೇ ದಿನೇ ಹೆಚ್ಚಳವಾಗುತ್ತಿದೆ.
9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು
ಪತ್ತೆಯಾಗುತ್ತಿದೆ. ಉತ್ತರಾಖಂಡ್ದಲ್ಲಿ ಮಕ್ಕಳು ಸೋಂಕಿಗೆ
ಒಳಗಾಗಿರುವುದು ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ
ಮಾಹಿತಿ ಪ್ರಕಾರ ಕಳೆದ 14 ದಿನದಲ್ಲಿ 1618 ಮಕ್ಕಳಲ್ಲಿ
ಸೋಂಕು ದೃಢಪಟ್ಟಿದೆ. ಕರ್ನಾಟಕದಲ್ಲಿ 79 ಸಾವಿರಕ್ಕೂ
ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ
4,426 ಜನರು ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಸೋಂಕಿನಿಂದ
ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ರಾಜ್ಯ ಸರ್ಕಾರ 5
ಜನರಿಗೆ ಮಾತ್ರವೇ ಅವಕಾಶ ನೀಡಿದೆ. ಆದರೆ ಹಲವೆಡೆ
ನಿಯಮ ಉಲ್ಲಂಘಿಸಿದ ಕಾರಣ ಸೋಂಕಿತ ವ್ಯಕ್ತಿಯ
ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಂತ 51 ಜನರಿಗೆ
ಸೋಂಕು ತಗುಲಿರೋ ಘಟನೆ ಚಿಕ್ಕಮಗಳೂರು ತಾಲೂಕಿನ
ಕೋಡಿಹಳ್ಳಿಯಲ್ಲಿ ಪತ್ತೆಯಾಗಿದೆ. ಸದ್ಯ ಸೋಂಕಿತರನ್ನು
ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಮೆಂಟ್ಗಳಿಲ್ಲ:
hrithiksuraj2@gmail.com