ರಾಜ್ಯದ 17 ಜಿಲ್ಲೆಗಳಲ್ಲಿ ಮಳೆ !
ರಾಜ್ಯದ ಕರಾವಳಿ, ದಕ್ಷಿಣ ಒಳನಾಡು & ಉತ್ತರ
ಒಳನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಏ.26ರವರೆಗೂ
17 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ
ಉಡುಪಿ, ದ.ಕ, ಉ.ಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಅದೇ ರೀತಿ ಮಲೆನಾಡು, ದಕ್ಷಿಣ ಒಳನಾಡು ಭಾಗದ
ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ,
ಶಿವಮೊಗ್ಗ, ಕೊಡಗು, ರಾಮನಗರ, ಹಾಸನ, ಉತ್ತರ
ಒಳನಾಡಿನ ಬಾಗಲಕೋಟೆ, ಹಾವೇರಿ, ಗದಗ, ಬೀದರ್,
ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.
ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಉಷ್ಣಾಂಶ: ಎಲ್ಲಿ
ಮಳೆ?
ಬೆಂಗಳೂರು: ಉಷ್ಣಾಂಶ/ ಗರಿಷ್ಠ 34°/ಕನಿಷ್ಠ 22°.
ಮೈಸೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 21°.
ಮಂಗಳೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 24°.
ಕಲಬುರ್ಗಿ: ಉಷ್ಣಾಂಶ/ ಗರಿಷ್ಠ 41°/ ಕನಿಷ್ಠ 25°.
ರಾಯಚೂರು: ಉಷ್ಣಾಂಶ/ ಗರಿಷ್ಠ 39°/ಕನಿಷ್ಠ 27°.
ಧಾರವಾಡ: ಉಷ್ಣಾಂಶ/ ಗರಿಷ್ಠ 35°/ಕನಿಷ್ಠ 21°.
ಮಡಿಕೇರಿ: ಉಷ್ಣಾಂಶ/ ಗರಿಷ್ಠ 27°/ಕನಿಷ್ಠ 19°. ಬಳ್ಳಾರಿ:
ಉಷ್ಣಾಂಶ/ ಗರಿಷ್ಠ 41°/ಕನಿಷ್ಠ 26°. ಇನ್ನು, ರಾಜ್ಯದ
ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
0 ಕಾಮೆಂಟ್ಗಳು
hrithiksuraj2@gmail.com