BIG NEWS: ಭಾರೀ ಮಳೆ-ಯೆಲ್ಲೋ ಅಲರ್ಟ್
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ
ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್
ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ,
ಮೈಸೂರು & ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ನೀಡಲಾಗಿದೆ. ಕರಾವಳಿ & ದಕ್ಷಿಣ ಒಳನಾಡಿನಲ್ಲಿ ಮುಂದಿನ
3 ದಿನಗಳವರೆಗೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ
ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ರಾಜ್ಯದ ಯಾವ ಊರಲ್ಲಿ ಎಷ್ಟಿದೆ ಉಷ್ಣಾಂಶ: ಎಲ್ಲಿ
ಮಳೆ?
ಬೆಂಗಳೂರು: ಉಷ್ಣಾಂಶ/ ಗರಿಷ್ಠ 33°/ಕನಿಷ್ಠ 22°.
ಮೈಸೂರು: ಉಷ್ಣಾಂಶ/ ಗರಿಷ್ಠ 34°/ ಕನಿಷ್ಠ 21°.
ಮಂಗಳೂರು: ಉಷ್ಣಾಂಶ/ ಗರಿಷ್ಠ 35°/ ಕನಿಷ್ಠ 24°.
ಕಲಬುರ್ಗಿ: ಉಷ್ಣಾಂಶ/ ಗರಿಷ್ಠ 40°/ ಕನಿಷ್ಠ 24°.
ರಾಯಚೂರು: ಉಷ್ಣಾಂಶ/ ಗರಿಷ್ಠ 38°/ಕನಿಷ್ಠ 23°.
ಧಾರವಾಡ: ಉಷ್ಣಾಂಶ/ ಗರಿಷ್ಠ 36°/ಕನಿಷ್ಠ 21°.
ಮಡಿಕೇರಿ: ಉಷ್ಣಾಂಶ/ ಗರಿಷ್ಠ 29°/ಕನಿಷ್ಠ 21°. ಇನ್ನು,
ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ,
ಹೊನ್ನಾವರ, ಗದಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
0 ಕಾಮೆಂಟ್ಗಳು
hrithiksuraj2@gmail.com