BREAKING: ದೇಶದಲ್ಲಿ ಕೊರೋನಾ ರುದ್ರನರ್ತನ
ದೇಶದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ
ಮುಂದುವರೆದಿದ್ದು, ಇಂದು ಮತ್ತೊಮ್ಮೆ 3 ಲಕ್ಷಕ್ಕಿಂತ ಅಧಿಕ
ಜನರಿಗೆ ಸೋಂಕು ತಗುಲಿದೆ ಹಾಗೂ 2 ಸಾವಿರಕ್ಕಿಂತ ಹೆಚ್ಚು
ಜನರು ಹೆಮ್ಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24
ಗಂಟೆಗಳಲ್ಲಿ
ದೇಶದಲ್ಲಿ 3,46,786 ನೂತನ ಸೋಂಕು ಪ್ರಕರಣಗಳು &
2,624 ಸಾವು ವರದಿಯಾಗಿವೆ. ಈ ಮೂಲಕ ದೇಶದಲ್ಲಿ
ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,66,10,481ಕ್ಕೆ
ಏರಿಕೆಯಾಗಿದ್ದು, ಮೃತರ ಸಂಖ್ಯೆ 1,89,544ಕ್ಕೆ ತಲುಪಿದೆ.
ಕರ್ನಾಟಕಕ್ಕೆ ಕಾಡಲಿದೆ ರಕ್ತದ ಅಭಾವ!
ಕೊರೋನಾ 2ನೇ ಅಲೆಗೆ ತತ್ತರಿಸಿರುವ ರಾಜ್ಯದಲ್ಲಿ
ಈಗಾಗಲೇ 60% ರಕ್ತದ ಕೊರತೆ ಉಂಟಾಗಿದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
ನೀಡುವುದರಿಂದ 28 ದಿನ ರಕ್ತ ಕೊಡಲಾಗುವುದಿಲ್ಲ.
ಹೀಗಾಗಿ ರಕ್ತದ ಅಭಾವ ಮತ್ತಷ್ಟು ಹೆಚ್ಚಾಗುವ ಆತಂಕ
ಶುರುವಾಗಿದೆ. ಪ್ರತಿ ತಿಂಗಳು ರಕ್ತ ನಿಧಿಯಿಂದ ಅಂದಾಜು
3 ಸಾವಿರ ಯುನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು.
ವರ್ಷಕ್ಕೆ 26 ಸಾವಿರ ರಕ್ತ ಯುನಿಟ್ ಸಂಗ್ರಹಿಸುವ ಗುರಿ
ಹೊಂದಲಾಗಿತ್ತು. ಆದರೆ, ಈಗ ಪ್ರತಿ ತಿಂಗಳು 600
ಯುನಿಟ್ ಸಂಗ್ರಹಿಸಲಾಗುತ್ತಿದೆ.
BREAKING: ವಾರಪೂರ್ತಿ ಕರ್ನಾಟಕ ಬಂದ್?
ರಾಜ್ಯದಲ್ಲಿ ಇಂದಿನಿಂದ ಜಾರಿಯಲ್ಲಿರುವ ವಾರಾಂತ್ಯದ
ಕರ್ಪ್ಯೂ ಸೋಮವಾರ ಮುಂಜಾನೆ 6ರವರೆಗೆ
ಜಾರಿಯಲ್ಲಿರಲಿದೆ. ಆದರೆ, ಇದೀಗ ವಾರ ಪೂರ್ತಿ ಕರ್ಪ್ಯೂ
ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್
ಅವರು ಹೇಳಿಕೆ ನೀಡಿದ್ದು,
ಜನರು ಕರ್ಪ್ಯೂಗೆ ಒಪ್ಪುವುದಿಲ್ಲ. ಅವರು
ಜವಾಬ್ದಾರಿಯುತವಾಗಿ ವರ್ತಿಸಬೇಕು.
ಮನೆಯಿಂದ
ಹೊರಬಂದಾಗ ಕನಿಷ್ಠ ಮಾಸ್ಟ್ ಆದರೂ ಧರಿಸಬೇಕು
ಎಂದು ಹೇಳಿದ್ದಾರೆ.
BREAKING: ವಾರಪೂರ್ತಿ ಕರ್ನಾಟಕ ಬಂದ್?
ರಾಜ್ಯದಲ್ಲಿ ಇಂದಿನಿಂದ ಜಾರಿಯಲ್ಲಿರುವ ವಾರಾಂತ್ಯದ
ಕರ್ಪ್ಯೂ ಸೋಮವಾರ ಮುಂಜಾನೆ 6ರವರೆಗೆ
ಜಾರಿಯಲ್ಲಿರಲಿದೆ. ಆದರೆ, ಇದೀಗ ವಾರ ಪೂರ್ತಿ ಕರ್ಪ್ಯೂ
ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ
ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು
ಹೇಳಿಕೆ ನೀಡಿದ್ದು, ಜನರು ಕರ್ಪ್ಯೂಗೆ ಒಪ್ಪುವುದಿಲ್ಲ. ಅವರು
ಜವಾಬ್ದಾರಿಯುತವಾಗಿ ವರ್ತಿಸಬೇಕು. ಮನೆಯಿಂದ
ಹೊರಬಂದಾಗ ಕನಿಷ್ಠ ಮಾಸ್ಟ್ ಆದರೂ ಧರಿಸಬೇಕು
ಎಂದು ಹೇಳಿದ್ದಾರೆ.
1 ಕಾಮೆಂಟ್ಗಳು
Best News in short word's
ಪ್ರತ್ಯುತ್ತರಅಳಿಸಿhrithiksuraj2@gmail.com