ಕಾಂಗ್ರೆಸ್ ನಿಂದ ಪತ್ರ !ಸರ್ಕಾರಕ್ಕೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ ?

ಕಾಂಗ್ರೆಸ್ ನಿಂದ ಪತ್ರ
ಬಡವರಿಗೆ, ಅಸಹಾಯಕರಿಗೆ ಆಸರೆಯಂತಿದ್ದ ಅನ್ನಭಾಗ್ಯ
ಯೋಜನೆಯ ಅಕ್ಕಿಯನ್ನು 7 ಕೆಜಿಯಿಂದ 2 ಕೆಜಿಗೆ ಸರ್ಕಾರ
ಇಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪತ್ರ ಚಳುವಳಿ
ಹಮ್ಮಿಕೊಂಡಿದೆ. ಕೊರೋನಾ & ಲಾಕ್ ಡೌನ್ ನಿಂದಾಗಿ
ಉದ್ಯೋಗ, ವ್ಯವಹಾರ, ಆದಾಯ ಎಲ್ಲವೂ ನಷ್ಟಗೊಂಡು
ಜನತೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಹೊತ್ತಿನಲ್ಲಿ 7
ಕೆಜಿ ಅಕ್ಕಿಯೇ ನೀಡಬೇಕೆಂದು ಪತ್ರ ಚಳುವಳಿಯನ್ನು
ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್‌ ತಿಳಿಸಿದ್ದು, ಜನ ಈ
ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.


ಸರ್ಕಾರಕ್ಕೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ






   
ರಾಜ್ಯದಲ್ಲಿ ಲಾಕ್ ಡೌನ್ ನಡುವೆಯೇ ಸರ್ಕಾರ ಲಸಿಕೆ
ನೀಡಲು ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್ ದ್ವೀಟ್ ಮಾಡಿ
ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಲಸಿಕೆ
ಕೊರತೆ ನೀಗಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ಲಸಿಕೆ ಖರೀದಿಗೆ ಎಷ್ಟು ಹಣ ಮೀಸಲಿಟ್ಟಿದೆ?, ಕಂಪೆನಿಗಳಿಗೆ
ಆರ್ಡರ್ ಮಾಡಲಾಗಿದೆಯೇ? ಕೇಂದ್ರ ಎಷ್ಟು ಲಸಿಕೆ
ನೀಡುತ್ತಿದೆ? ರಾಜ್ಯದಲ್ಲಿ ಲಸಿಕೆ ದಾಸ್ತಾನು ಎಷ್ಟಿದೆ & 2ನೇ
ಡೋಸ್ ಪಡೆಯುವವರಿಗೆ ಕೊರತೆಯಾಗದಂತೆ ಯಾವ
ಕ್ರಮಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು