ಈಗಿನ ಪರಿಸ್ಥಿತಿಗೆ ಜನರೇ ಕಾರಣ ಎಂದ ಸುಧಾಕರ್! BREAKING: ಸಚಿವ ಸುಧಾಕರ್ ಸ್ಫೋಟಕ ಹೇಳಿಕೆ ? BIG UPDATE: ಲಾಕ್ ಡೌನ್ ಬಗ್ಗೆ ಡಿಸಿಎಂ ಮಹತ್ವದ ಮಾಹಿತಿ?

 ಈಗಿನ ಪರಿಸ್ಥಿತಿಗೆ ಜನರೇ ಕಾರಣ ಎಂದ ಸುಧಾಕರ್!

ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿಗೆ ಜನರೇ ಕಾರಣ

ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ

ಅವರು, ಸರ್ಕಾರ ಎಷ್ಟು ಬಾರಿ ಎಚ್ಚರಿಸಿದರೂ ಜನರು

ಎಚ್ಚೆತ್ತುಕೊಳ್ಳಲಿಲ್ಲ, ಹಾಗಾಗಿ ಇಂದು ಈ ಪರಿಸ್ಥಿತಿ

ಎದುರಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಜನರಿಗೆ

ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ಆಗುತ್ತಿಲ್ಲ ಎಂದ

ಅವರು, ವಿಪಕ್ಷಗಳ ಆರೋಪ ಅಲ್ಲಗೆಳೆಯುವುದಿಲ್ಲ ಹಾಗೂ

ವಾಸ್ತವ ಏನಿದೆಯೋ ಅದನ್ನು ಒಪ್ಪಿಕೊಳ್ಳಬೇಕು ಎಂದರು.


BREAKING: ಸಚಿವ ಸುಧಾಕರ್ ಸ್ಫೋಟಕ ಹೇಳಿಕೆ



ಬೆಂಗಳೂರಿನಲ್ಲಿ & ಹೆಚ್ಚು ಪ್ರಕರಣಗಳಿರುವ ಬೇರೆ

ಜಿಲ್ಲೆಗಳಿಗೆ ಪ್ರತ್ಯೇಕ ನಿಯಮಗಳನ್ನು ತರಲಾಗುತ್ತದೆ.

ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ

ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ

ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ

ಡಾ. ಸುಧಾಕರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ. ಜನ

ಗುಂಪು ಸೇರುವುದರಿಂದಲೇ ಪ್ರಕರಣಗಳು ಹೆಚ್ಚಾಗುತ್ತಿವೆ.

ಕ್ಲೋಸ್ ಸರ್ಕ್ಯೂಟ್‌ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ

ವೈರಸ್ ಹರಡುತ್ತದೆ ಎಂದು ಸಚಿವರು ಸ್ಫೋಟಕ ಹೇಳಿಕೆ

ನೀಡಿದ್ದಾರೆ.


BIG UPDATE: ಲಾಕ್ ಡೌನ್ ಬಗ್ಗೆ ಡಿಸಿಎಂ

ಮಹತ್ವದ ಮಾಹಿತಿ



ಕೊರೋನಾ ಎರಡನೇ ಅಲೆಯ ಅಬ್ಬರದ ಹಿನ್ನೆಲೆ

ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ

ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಸಂಜೆ

ಸರ್ವಪಕ್ಷ ಸಭೆ ನಡೆಯಲಿದ್ದು, ರಾಜ್ಯದ ಜನರ ಚಿತ್ತ

ಈ ಸಭೆಯತ್ತ ನೆಟ್ಟಿದೆ. ಸಭೆಯಲ್ಲಿ ಯಾವ ನಿರ್ಧಾರ

ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಅರಿಯಲು ಜನರು

ಕಾತುರರಾಗಿದ್ದಾರೆ. ಈ ಮಧ್ಯೆ ಡಿಸಿಎಂ ಡಾ.ಸಿ.ಎನ್.

ಅಶ್ವತ್ಥನಾರಾಯಣ್ ಅವರು ಈ ಬಗ್ಗೆ ಮಹತ್ವದ

ಹೇಳಿಕೆ ನೀಡಿದ್ದು, ರಾಜ್ಯದ ಎಲ್ಲಿಯೂ ಲಾಕ್ ಡೌನ್

ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು