ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್
ಯತ್ನಾಳ್ ಅವರನ್ನು ಶೀಘ್ರವೇ ಪಕ್ಷದಿಂದ ಹೊರ
ಹಾಕುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ
ಅರುಣ್ ಸಿಂಗ್ ಇಂದು ಬೆಳಗಾವಿಯಲ್ಲಿ ತಿಳಿಸಿದ್ದಾರೆ.
ಯತ್ನಾಳ್ ಅವರ ಬಗ್ಗೆ ನಾನು ಮಾತನಾಡಲ್ಲ. ಅವರ
ಬಗ್ಗೆ ಮಾತನಾಡಿದರೆ ಅವರ ಪ್ರಸಿದ್ಧಿ ಹೆಚ್ಚುತ್ತದೆ.
ಯತ್ನಾಳ್ ಮೇಲೆ ಬಿಜೆಪಿಗೆ ಯಾವುದೇ ನಂಬಿಕೆ ಇಲ್ಲ.
ಪಕ್ಷ ಅವರ ಮೇಲೆ ಶೇ.00.1ರಷ್ಟೂ ನಂಬಿಕೆ ಹೊಂದಿಲ್ಲ.
ಶಾಸಕರಿಗೆ ಈಗಾಗಲೇ ನೋಟಿಸ್ ನೀಡಿದ್ದು, ಶೀಘ್ರ
ಹೊರಹಾಕಲಾಗುತ್ತದೆ ಎಂದರು.
ಸಿಎಂ ಏನು ಮಾಡುತ್ತಿದ್ದಾರೆಂದು ಸಚಿವರಿಗೇ
ಗೊತ್ತಿಲ್ಲ: ಎಂಬಿಪಿ
ಇಂದಿನ ದಿನಗಳಲ್ಲಿ ಉದ್ಯಮಿಗಳಾದ ಮುಖೇಶ್
ಅಂಬಾನಿ & ಅದಾನಿ ಅವರು ದೇಶಕ್ಕೆ ಒಂದು ರೀತಿ ಈಸ್ಟ್
ಇಂಡಿಯಾ ಕಂಪನಿಯಂತಿದ್ದಾರೆ ಎಂದು ಮಾಜಿ ಸಚಿವ
ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ
ಮಾತನಾಡಿ, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ
ಎಂಬುದು ಸಚಿವರಿಗೇ ಗೊತ್ತಿಲ್ಲ. ರಾಜ್ಯದಲ್ಲಿ ಕೆಟ್ಟ
ಸರ್ಕಾರವಿದೆ ಎಂದು ಆರೋಪಿಸಿದರು. ಬೆಳಗಾವಿ
ಲೋಕಸಭಾ ಕ್ಷೇತ್ರಕ್ಕೆ ಏ.17ರಂದು ಉಪ ಚುನಾವಣೆ
ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ
ಪರ ಪಾಟೀಲ್ ಮತಯಾಚಿಸಿದ್ದಾರೆ.
0 ಕಾಮೆಂಟ್ಗಳು
hrithiksuraj2@gmail.com