Shocking: ಮೇ 5ಕ್ಕೆ ಕರ್ನಾಟಕ, ಮೇ 15ಕ್ಕೆ ದೇಶ..
ಮೇ 5ಕ್ಕೆ ಕರ್ನಾಟಕ, ಮೇ 15ಕ್ಕೆ ದೇಶದಲ್ಲಿ ಕೊರೋನಾ
ವೈರಸ್ ಗರಿಷ್ಠ ಮಟ್ಟ ತಲುಪಬಹುದು ಎಂದು ಕಾನ್ಸುರ
ಐಐಟಿ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಿಂದ
ತಿಳಿದುಬಂದಿದೆ. ಕರ್ನಾಟಕದಲ್ಲಿ ಮೇ 1ರಿಂದ 5ರ
ವೇಳೆಗೆ ಕೊರೋನಾ ತುತ್ತತುದಿಗೆ ತಲುಪಬಹುದು ಎಂದು
ಅಂದಾಜಿಸಲಾಗಿದೆ. ಏಪ್ರಿಲ್ 25-30ರ ವೇಳೆಗೆ ದೆಹಲಿ,
ಹರ್ಯಾಣ, ರಾಜಸ್ಥಾನ್, ತೆಲಂಗಾಣ & ಬಿಹಾರ. ಮೇ
6-10ರ ವೇಳೆಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ
ಕೋವಿಡ್ ಗರಿಷ್ಠ ಮಟ್ಟ ತಲುಪಬಹುದು ಎಂದು
ಹೇಳಲಾಗಿದೆ.
ಆಕ್ಸಿಜನ್ ಕೊರತೆ; ಆಸ್ಪತ್ರೆಯಲ್ಲಿ 20 ರೋಗಿಗಳ ಸಾವು!
ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಕ್ಸಿಜನ್
ಕೊರತೆಯಿಂದಾಗಿ ಕಳೆದ ರಾತ್ರಿ 20 ಜನ ಕೊರೋನಾ
ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದಿಂದ ಆಸ್ಪತ್ರೆಗೆ 3.5 ಮೆಟ್ರಿಕ್ ಟನ್ ಆಕ್ಸಿಜನ್
ಹಂಚಿಕೆಯಾಗಿತ್ತು. ಇದು ನಿನ್ನೆಯಿಂದಲೇ ರೀಫಿಲ್
ಆಗಬೇಕಿತ್ತು. ಆದರೆ, ಶುಕ್ರವಾರ ರಾತ್ರಿ 1500
ಲೀಟರ್ ಪೂರೈಸಲಾಗಿತ್ತು. ಹಾಗಾಗಿ, ಆಸ್ಪತ್ರೆಯಲ್ಲಿ
ಆಕ್ಸಿಜನ್ ಖಾಲಿಯಾಗಿದ್ದು, 20 ಜನ ರೋಗಿಗಳು
ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
0 ಕಾಮೆಂಟ್ಗಳು
hrithiksuraj2@gmail.com