ಕೊರೋನಾಗೆ ಬಲಿಯಾಗಿದ್ದ ಕೈ ಅಭ್ಯರ್ಥಿಗೆ ಗೆಲುವು
ಕೊರೋನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದ
ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹೌದು, ಮೃತ
ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜ್ ಅವರು
ರಾಮನಗರ ನಗರಸಭೆಯ ನಾಲ್ಕನೇ ವಾರ್ಡ್ ನಿಂದ
ಸ್ಪರ್ಧಿಸಿದ್ದರು. ಈ ಚುನಾವಣಾ ಫಲಿತಾಂಶವು ಇಂದು
ಪ್ರಕಟವಾಗಿದ್ದು, ಲೀಲಾ ಅವರಿಗೆ ಗೆಲುವಾಗಿದೆ. ಇವರು
ನಿನ್ನೆಯಷ್ಟೇ ಮಹಾಮಾರಿ ಕೊರೋನಾ ಸೋಂಕಿಗೆ
ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಖಾಲಿಯಾದ ಈ
ಸ್ಥಾನಕ್ಕೆ ಮತ್ತೊಮ್ಮೆ ಉಪ ಚುನಾವಣೆ ನಡೆಸಬೇಕಿರುವುದು
ಅನಿವಾರ್ಯವಾಗಿದೆ.
'ಬೇರೆಯವರ ಹೆಂಡತಿಯರ ಚೆನ್ನಾಗಿ ಲೆಕ್ಕ ಹಾಕುವ ನೀವು...'
ಬೇರೆಯವರ ಹೆಂಡತಿಯರನ್ನು ಚೆನ್ನಾಗಿ ಲೆಕ್ಕ ಹಾಕುವ
ನೀವು ಕೊರೋನಾ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ
ಎಂದು ರಾಜ್ಯ ಕಾಂಗ್ರೆಸ್ ಘಟಕವು ಆರೋಗ್ಯ ಸಚಿವ
ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಟ್ವಿಟ್
ಮಾಡಿ, ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ
ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ
ಸುದ್ದಿಗಳು ಕಾಣುತ್ತಿವೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಡಲು
ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ. ಆ ಮೂಲಕ ಪ್ರಧಾನಿ
ಮೋದಿಯ ಚಾಳಿ ಮುಂದುವರಿಸಿದೆಯೆಂದು ಕಿಡಿಕಾರಿದೆ.
0 ಕಾಮೆಂಟ್ಗಳು
hrithiksuraj2@gmail.com